ಬ್ರೇಕ್ ಡೌನ್
ತಾಯಿಯನ್ನು ಸಮಾಧಾನ ಪಡಿಸಿದ. ನಾನು ಹೋಗಿ ನೋಡುತ್ತೇನೆ ಎಂದು ಮಗ ಹೇಳಿದರೂ ಆಕೆ ಕೇಳಲಿಲ್ಲ.ಅಪ್ಪಯ್ಯ ದೀಕ್ಷಿತ್ ಅವರ ಜೊತೆಗೆ ಜೀವನ ಸಾಗಿಸಿದವಳು ಅವಳು.ಆ ರೋಧನೆ ಅವಳನ್ನು ಮನೆಯಲ್ಲಿಯೇ ಇರಲು ಬಿಡಲಿಲ್ಲ.ಅವಳೂ ಇವನೊಂದಿಗೆ ಹೊರಟು ನಿಂತಳು.ಖದೀಮರು ಎಣಿಸಿದಂತೇ ಧೀರಜ್ ಮನೆ ನೋಡಿಕೊಳ್ಳಲು ನೇಮಿಸಿ ನಡೆದರು.ಇತ್ತ ಅಪ್ಪಯ್ಯ ದೀಕ್ಷಿತ್ ಅವರನ್ನು ಕೊಲೆ ಮಾಡಿದ ಇಬ್ಬರೂ ಬಂದು ಮುಟ್ಟಿದ್ದರು. ಧೀರಜ್ ಮನೆಗಾವಲಿಗೆ ನಿಂತ. ಗಂಡ ಮನೆಗೆ ಬಂದಿಲ್ಲ ಎಂದು ಶ್ರೀಮತಿ ಕಾಯುತ್ತಿದ್ದಳು.ಮಗನನ್ನು ನೋಡದೇ ಧೀರಜ್ ಚಡಪಡಿಸುತ್ತಿದ್ದ.ಅದೇ ಸಮಯ ಎಂದುಕೊಂಡು ಖದೀಮರಲ್ಲೊಬ್ಬ ಬಂದ.ಸಮಯ ಸಾಧನೆ ಅಂದರೆ ಇದೇ. ಅಣ್ಣ ಒಂದು ಸಹಾಯ ಮಾಡ್ತೀಯಾ ಎಂದು ಧೀರಜ್ ಕೇಳಿದ. ಈ ಜೀವ ಇರೋದೇ ಪರರಿಗಾಗಿ ,ಅದೇನು ಅಂತ ಹೇಳು ಮಾಡ್ತೀನಿ ಎಂದು ಆತ ಪ್ರತಿಕ್ರಿಯೆ ನೀಡಿದ.ಅದು ನಮ್ಮನೆ ಕಡೆಗೆ ಹೋಗಿ ನನ್ನ ಹೆಂಡ್ತಿಗೆ ವಿಷಯ ತಿಳಿಸಿ ಬಂದುಬಿಡ್ತೀಯಾ!!? ಪಾಪ ಸುಮ್ಮನೇ ಕಾದು ಕಾದು ನಾನ್ ಬರಲಿ ಅಂತಾನೇ ದಾರೀನ ಮಿರ ಮಿರ ಅಂತ ನೋಡ್ತಾ ಇರ್ತಾರೆ.
ಅಯ್ಯೋ ಇಷ್ಟೇ ತಾನೇ ! ಇದೇನೂ ದೊಡ್ದ ಕೆಲಸ ಅಲ್ಲ ಬಿಡು.ಅದಕ್ಕ್ಯಾಕೆ ತಲೆ ಕೆಡಸ್ಗೊಂತೀಯಾ!?ಹೋಗು,ನೀನೇ ಹೋಗಿ ಬಾ.ಪಾಪ ಮಗನ್ನ ಮುಖ ನೋಡದೇ ನಿಂಗೂ ಬೇಜಾರ್ ಬಂದಿರ್ತದೆ.ಅದರಲ್ಲೂ ಹೆಂಡ್ತಿಗೆ ನೀನು ಹೋಗಿ ಒಂದು ಮಾತು ಹೇಳಿ ಬಂದರೆ ಅವಳಿಗೂ ಸಮಾಧಾನ ಇರುತ್ತದೆ. ಅದರಲ್ಲೂ ಮಗನ್ನ ಮಾತಡ್ಸಿ ಅವಳಿಗೆ ಹೇಳಿ ಬಂದ್ನಲ್ಲ ಅನ್ನೋ ಸಮಾಧಾನ ನಿಂಗೂ ಇರ್ತದೆ. ಧೀರಜ್ ಯೋಚಿಸಿದ ಮತ್ತೆ ಮಾತನಾಡಿದ.ಆದರೆ ಅಣ್ಣ,ಯಜಮಾನ್ರು ನನ್ನ ಮೇಲೆ ನಂಬಿಜೆ ಇಟ್ಟು ಮನೆನೇ ಬಿಟ್ಟು ಹೋಗವ್ರೆ.ಅದೆಲ್ಲಾ ನೀನು ಎನೂ ಯೋಚಿಸೋ ಕೆಲಸ ಇಲ್ಲ.ನಾನು ಇದೀನಿ ತಾನೇ;! ನೋಡ್ಕೊಂತೀನಿ ನೀನು ಹೋಗಿ ಬಾ!.ಎಂದು ಭರವಸೆ ನೀಡಿದ.
ಮೋಸದ ಗುಂಡಿಯೊಳಗೆ ಶಿಶುವಿನ ರೂಪದಲ್ಲಿ ಧೀರಜ್ ಹೋಗಿ ಬಿದ್ದಿದ್ದ.ತಳ್ಳುವವರ ಮೋಸದ ಸಂಚು ಇವನಿಗೇನು ಗೊತ್ತು!!? ಧೀರಜ್ ಮನೆಗೆ ನಡೆದ.ಕಗ್ಗತ್ತಲು ಆವರಿಸುತ್ತಲಿತ್ತು.ಏನೋ ಗೊಂದಲ.ಇಲ್ಲ ಸಲ್ಲದ ಯೋಚನೆ.ಕೆಲವೊಮ್ಮೆ ನಾವುಗಳು ಯೋಚನೆ ಮಾಡುವ ಬದಲು,ಬೇರೆಯವರ ಯೋಚನೆಯನ್ನೇ ನಮ್ಮದು ಎಂದು ತಪ್ಪು ತಿಳಿದು ಆ ಕ್ಷಣ ಯೋಚಿಸುವುದನ್ನು ಬಿಟ್ಟಾಗ ಅಸಂಭವವೂ ಸಂ ಭವವಾಗುತ್ತೆ.ನಮಗೆ ನಾವೇ ಮೋಸ ಮಾಡಿಕೊಂಡು ನಂತರದಲ್ಲಿ ಮೋಸ ಹೋಗಿದ್ದೇನೆ ಎಂದು ಊರೆಲ್ಲ ಸಾರಿ ಹೇಳುವ ಜನಗಳು ನಾವು!.ಧೀರಜ್ ಗೆ ತಾನು ಮಾಡಿದ್ದು ಸರಿಯೇ ಅಥವಾ ತಪ್ಪು ಹೆಜ್ಜೆಗೆ ಬುನಾದಿ ಹಾಕಿದೆನೇ!? ಎಂಬ ಗೊಂದಲ.ಈ ಗೊಂದಲಗಳಿಗೆ ಮೂಲ ಎಂದರೆ ಅಪ್ಪಯ್ಯ ದೀಕ್ಷಿತ್ ಅವರು ಇವನ ಮೇಲೆ ಇಟ್ಡಿದ್ದ ನಂಬಿಕೆ,ಭರವಸೆ.
ಕಳ್ಳತನಕ್ಕೆ ಅಡಿಹೆಜ್ಜೆ ಇಡಲು ಪ್ರಾರಂಭ ಅಷ್ಟರಲ್ಲೇ ಶುರುವಾಯಿತು. ಧೀರಜ್ ಗೆ ಭರವಸೆ ನೀಡಿದ್ದ ವ್ಯಕ್ತಿ ಒಬ್ಬನನ್ನು ಬಿಟ್ಟು ಉಳಿದ ಎಲ್ಲರೂ ಒಳಗೆ ನಡೆದರು.ಮನೆಯ ಬಾಗಿಲ ಬೀಗವನ್ನು ಒಡೆಯಲಾಯಿತು.ಅವರೆಲ್ಲ ಯೋಜಿಸಿ ಕದಿಯುತ್ತಿದ್ದವರು.ಅಲ್ಲಿ ಯಾವುದೇ ಸುಳಿವು ಉಳಿಸದ ಹಾಗೆ ಕೆಲಸ ಮಾಡುವುದೇ ಕೆಲಸದ ಮುಖ್ಯ ಉದ್ದೇಶ ಮತ್ತು ಗುರಿಯಾಗಿತ್ತು. ಕೈಗೆ ಗ್ಲೌಸ್ ಹಾಕಿ,ದೇಹ ಮುಚ್ಚುವಂತೆ ಕರಿಯ ವಸ್ತ್ರ ಧರಿಸಿ ಬಂದಿದ್ದರು. ಖಜಾನೆ ಇರುವ ಸ್ಥಳದ ಹುಡುಕಾಟ ಇಲ್ಲಿರಲಿಲ್ಲ.ಯಾಕೆಂದರೆ ಇವರು ಎಲ್ಲ ಬಲ್ಲವರು.ಅದೇ ಮನೆಯಲ್ಲಿ ಕುಳಿತು ಊಟ ಮಾಡಿದವರು.ದಣಿದು ಬಂದಾಗ ನೀರು ಕುಡಿದು ದಾಹ ತಣಿಸಿಕೊಂಡವರು.ಹಣಕಾಸು ಸಂಬಂಧ ಅಪ್ಪಯ್ಯ ದೀಕ್ಷಿತ್ ಅವರ ಮುಂದೆ ಅಂಗಲಾಚಿ ನಿಂತವರು. ಈ ಬಡತನದ ಬೇಗೆ ಎನ್ನುವ ಒಂದು ವ್ಯವಸ್ಥೆ ಇವರನ್ನು ಆ ಮಟ್ಟಕ್ಕೆ ಇಳಿಸಿತ್ತು.ಬಡತನದ ಬೇಗೆಯನ್ನಾದರೂ ತಡೆದು ಮೆಟ್ಟಿ ನಿಂತವರುಂಟು ಜಗದಲಿ,ಆಸೆಯನ್ನಾರು ಮೀರುವರು! ಎಲ್ಲಾ ಬಿಟ್ಟು ಸನ್ಯಾಸ ದೀಕ್ಷೆ ಪಡೆದವರೂ ಅಲ್ಲ ಇವರು.!
ಲಾಕರ್ ಬಹು ಭದ್ರವಾಗಿತ್ತು.ಅದನ್ನು ಒಡೆಯುವ ಅದೆಲ್ಲ ಸಲಕರಣೆಗಳು ಇವರುಗಳ ತೆಕ್ಕೆಯಲ್ಲಿದ್ದವು.ಅವುಗಳ ಸರಿಯಾದ ಉಪಯೋಗ ಮಾಡುವಲ್ಲಿ ಯಶಸ್ಸು ಕಾಣಬೇಕಿತ್ತಷ್ಟೇ.ಸಲಕರಣೆಗಳ ದುರ್ಬಳಕೆ ಇದು .ಅವುಗಳನ್ನು ಸೃಷ್ಟಿಸಿದ ನಿರ್ದಿಷ್ಟ ಕಾರ್ಯಗಳನ್ನು ಮಾಡುವುದು ಬಿಟ್ಟು ಉಳಿದೆಲ್ಲ ಕಾರ್ಯಗಳಿಗೂ ಉಪಯೋಗಿಸುವುದು ದುರ್ಬಳಕೆ ಅಲ್ಲದೆ ಮತ್ತೇನು!? .
ಹೊರಗೆ ಇದ್ದವ ಯಾರಾದರೂ ಅತ್ತ ಕಡೆ ಬಂದಾರು ಎಂಬ ಸಂಶಯದ ಮೇಲೆ ಕಣ್ಣಿಟ್ಟು ಕೂತಿದ್ದ.ತಲೆಯಲ್ಲಿ ಅಕಸ್ಮಾತ್ ಧೀರಜ್ ವಾಪಾಸ್ಸು ಬಂದರೆ ಏನುಮಾಡಲಿ !? ಎಂಬ ಯೋಚನೆ ತಿರುಗುತ್ತಿತ್ತು.ಅವರು ಮೂವರು ಅತ್ತ ಕೆಲಸದಲ್ಲಿ ತಲ್ಲೀನರಾಗಿದ್ದರು.ಆದರೆ ಹೊರಗಿದ್ದವನ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿತ್ತು.ಅವನ ಮನಸ್ಸು ಚಂಚಲವಾಗಿ ನೂರೆಂಟು ಗೊಂದಲುಗಳು,ಗುಪ್ತ ಮನಸ್ಸಿನ ಸತ್ವಯುತ ಭಾವದ ಗೋಜಲುಗಳು ಅನೇಕ,ನಾವು ಮಾಡುತ್ತಿರುವುದು ಸರಿಯೇ ಎಂಬ ಹದಿನೆಂಟು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುತ್ತಿದ್ದ. ಅದಕ್ಕೇ ಇರ್ಬೋದು ಹಿರಿಯರು ಹೇಳೋದು, ದೇಹ ಮತ್ತು ಮನಸ್ಸುಗಳು ಸಮ್ಮಿಲನದಲ್ಲಿ ಕೆಲಸ ಮಾಡುತ್ತಿರುವಾಗ ಅದ್ಯಾವ ಯೋಚನೆಗಳಿಗೂ ಮನಸ್ಸು ಜಾಗ ಬಿಟ್ಟು ಕೂತಿರುವುದಿಲ್ಲ.ಬದಲಾಗಿ ದೇಹ ವಿಶ್ರಾಂತಿ ಪಡೆಯುತ್ತಿರುವಾಗ,ಮನಸ್ಸು ಜಾಗ ಬಿಟ್ಟು ಖಾಲಿ ಕೂತಿರುತ್ತೆ.ಅಲೋಚನೆಗಳ ಬರುವಿಕೆಯ ಬಯಸಿ. ಒಳಗೆ ಕಸರತ್ತು ಪ್ರದರ್ಶನ ನಡೆಯುತ್ತಲಿತ್ತು. ಸತತ ೩೦ ನಿಮಿಷಗಳ ಪ್ರಯತ್ನದಿಂದ ಲಾಕರ್ ಒಡೆಯಲಾಯಿತು