ಶವದ ಸುತ್ತ ಮುತ್ತಿದೆ ಭಾವನೆಗಳು.
ಧೀರಜ್ ಹೆಂಡತಿ ಕಳಿಸಿದ್ದ ಆ ಹುಡುಗ ಬಂದು ಮುಟ್ಟಿದ. ಅಣ್ಣಾ ಎಂದು ಕರೆದ.ದೀರಜ್ ಗೆ ಅದ್ಯಾರೋ ಕನಸಿನಲ್ಲಿ ಕರೆದ ಹಾಗೇ ಭಾಸವಾಯಿತು.ಅಣ್ಣಾ ಎಂದು ಇನ್ನೊಮ್ಮೆ ಕರೆದಾಗ ಕಣ್ಣು ಒಡೆಯಲೆತ್ನಿಸಿದ.ಕ್ಯಾರಿಯರ್ ಬಾಕ್ಸ್ ಹಿಡಿದು ನಿಂತಿದ್ದ ಹುಡುಗ ಮಸುಕು ಮಸುಕಾಗಿ ಕಾಣುತ್ತಿದ್ದ.ಒಂದು ನಿಮಿಷ ಅದೇ ರೀತಿ ಸ್ತಬ್ಧ.ಯಾರೂ ಏನೂ ಮಾತನಾಡಲಿಲ್ಲ.ಹುಡುಗ ಪ್ರಾರಂಭಿಸಿದ,ಅಣ್ಣಾ... ಅಕ್ಕಾ ತಿಂಡಿ ಕೊಟ್ಟು ಕಳ್ಸಿದಾಳೆ.ತಿನ್ಬೇಕಂತೆ.ಮುಂದುವರೆದು ಹೇಳಿದ ಅಂದಹಾಗೆ ನೀನು ಮನೆಗೆ ಬರೋದು ಎಷ್ಟು ಹೊತ್ತು ಆಗುತ್ತೆ ಅಂತ ಕೇಳ್ಕೊಂಡು ಬರೋಕೆ ಹೇಳಿದ್ದಾಳೆ.ನಾನ್ ಬರ್ತೀನಿ ಅಂತ ಹೇಳು ಅವ್ಳಿಗೆ.ಯಜಮಾನ್ರ ಶವ ಮನೆಗೆ ಬರಬೇಕು,ಆದ್ರೆ ಶವ ಮನೆಗೆ ತರೋದಿಲ್ಲ,ಆಗಿದ್ದು ಕೊಲೆ .ಪೋಸ್ಟ್ ಮಾರ್ಟೆಮ್ ಮಾಡ್ತಾರೋ ಏನೋ.ಒಟ್ನಲ್ಲಿ ಚಿಕ್ಕ ಯಜಮಾನ್ರು ಯಾವಾಗ ಮನೆಗೆ ಬಂದು ಮುಟ್ತಾರೋ ಅಲ್ಲಿ ತನಕ ನಾನಿಲ್ಲೇ ಇರ್ಬೇಕಾಗುತ್ತೆ.ಅದಲ್ಲದೇ ಮನೆಯ ಜವಾಬ್ದಾರಿ ಹೊತ್ತು ನಿಂತಿದ್ದೇನೆ.ಅವಳು ಹೇಳದ್ಲು ಅಂತ ಯಾವಾಗ್ ಬೇಕೋ ಅವಾಗ ಬರೋಕಾಗಲ್ಲ.ನನ್ನ ಬಗ್ಗೆ ಯೋಚನೆ ಮಾಡೋದ್ ಬಿಟ್ಟು ಅವಳ ಕೆಲಸ ಅವಳಿಗೆ ಮಾಡೋಕೆ ಹೇಳು ಎಂದು ಧೀರಜ್ ಪ್ರತಿಕ್ರಿಯಿಸಿದ.
ಅಯ್ಯೋ ಈ ಅಣ್ಣ ಯಾಕ್ ಈ ತರ ಮಾತಾಡ್ತಾವ್ರೆ ಅಕ್ಕಂಗ್ ಯಾಕ್ ಬಯ್ತಾ ಇದಾರೆ!?.ಏನೋಪ್ಪ ಈ ಗಂಡ ಹೆಂಡತಿ ಪ್ರೀತಿ ಅರ್ಥ ಮಾಡ್ಕೋಳ್ಳೋದು ತುಂಬಾನೇ ಕಷ್ಟ ಎಂದು ಗೊಣಗಿದ.ಆಯ್ತ್ ಅಣ್ಣಾ ನಾನಿನ್ನು ಹೊರಡ್ತೀನಿ ಎಂದ.ಎಯ್ ಯಾಕೋ ಆಟ ಅಡ್ಕೊಳ್ಬೇಕಾ? ಒಂದೆರಡು ನಿಮಿಷ ಇದ್ದು ಈ ಬಾಕ್ಸ್ ಕೂಡ ತಗೊಂಡು ಹೋಗ್ಬಿಡು.ಮತ್ತ್ಯಾವ್ದಾದ್ರೂ ವಸ್ತು ಹಾಕೋಕೆ ಬೇಕಾದ್ರೂ ಅಗ್ಬೋದು .ಎಂದವನೇ ಮುಖ ತೊಳೆದು ಬಂದು ತಿನ್ನಲಾರಂಭಿಸಿದ.ಹತ್ತು ನಿಮಿಷಗಳ ನಂತರ ಮುಗಿಸಿದ.ಅಲ್ಲಿಯೇ ಇದ್ದ ನೀರಿನಲ್ಲಿ ತೊಳೆದು ಹೇಳಿದ,ಲೋ ತಗೋಳೋ ಇನ್ನೂ ಸ್ವಲ್ಪ ಹೊತ್ತು ನಿನ್ನ ಇಲ್ಲೇ ಇಟ್ಗೊಂಡ್ರೆ ಅದ್ಬೇರೆ ಗೋಳಾಗುತ್ತೆ.ಸರಿ ನೀನು ಹೊರಡು.ಮತ್ತೇ ನಾನ್ ಅವ್ಳಿಗೆ ಬಯ್ದಿದ್ದು ಬಿಟ್ಟು ಮತ್ತೆಲ್ಲಾ ಹೇಳು ಎಂದು ಕಳುಹಿಸಿದ.
ಸಮಯ ಕಳೆದಂತೆ ಕರಗುವ ಮನಸ್ಸು ಕ್ರೋಧದೆಡೆಗೆ ತಿರುಗುತ್ತಲಿತ್ತು.ಕ್ರೋಧ ಆಕ್ರಂದನಕ್ಕೆಡೆಮಾಡುತ್ತಾ,ದ್ವೇಷದ ಅಮಲಿನಲ್ಲಿ ಡ್ರೈವರ್ ಗೆ ಏನಾದರೂ ಮಾಡಬೇಕೇಂದರೆ ಅದೆಲ್ಲಿ ಸಾಧ್ಯ? ಸತ್ತ ಸೊಳ್ಳೆಯ ರೆಕ್ಕೆ ಕಿತ್ತಂತೆ.ಅದಾಗಲೇ ಪೋಲಿಸ್ ಠಾಣೆಗೆ ಸುದ್ದಿ ಮುಟ್ಟಿತ್ತು.ಹತ್ತಿರದ ಪೋಲಿಸ್ ಇಲಾಖೆಯ ಸಿಬ್ಬಂದಿ ಗೆ ಹೋಗಿ ಪರಿಶೀಲನೆ ಮಾಡಲು ಉನ್ನತ ಮಟ್ಟದ ಅಧಿಕಾರಿಯಿಂದ ಆರ್ಡರ್ ಬಂದಿತ್ತು.ಪೋಲಿಸ್ ಸಿಬ್ಬಂದಿ ಬಂದು ಸ್ಥಳದ ಪರಿಶೀಲನೆ ನಡೆಸಿದರು.ಸಾಕ್ಷಿಯೂ ಹಾಗೂ ಅಲ್ಲುಳಿದಿದ್ದ ಮಿಥ್ಯದ ಭಾಗಗಳೇ ಸಹಿ ಎನ್ನವಂತೆ ಗೋಚರಿಸುತ್ತಿತ್ತು.ಪೋಲಿಸ್ ಅಧಿಕಾರಿಯೇನು? ಅಳಿದುಳಿದ ಸುಳಿವುಗಳು ಸಾರಿ ಹೇಳುವುದನ್ನು ಮೀರಿ ಯೋಚನೆಗೆ ಇಣುಕುವ ಸಾಹಸಕ್ಕೆ ಯಾರೂ ಕೈ ಹಾಕಲಿಚ್ಛಿಸುವುದಿಲ್ಲ.ಮೇಲಿನ ಅಧಿಕಾರಿಗೆ ಪೋನ್ ಮಾಡಿದರು.
ಸರ್ ಇಲ್ಲಿ ಎರಡು ಶವಗಳು ಉರುಳಿ ಬಿದ್ದಿದೆ.ಇಲ್ಲಿರೋ ವಾತಾವರಣದ ಪ್ರಕಾರ ಅಪ್ಪಯ್ಯ ದೀಕ್ಷಿತ್ ಅವರನ್ನ ಡ್ರೈವರ್ ಕೊಲೆ ಮಾಡಿ ಹೋಗ್ಬೇಕಾದ್ರೆ ಅವನೂ ಅವಸಾನ ಹೊಂದಿದ್ದಾನೆ.ಆದ್ದರಿಂದ ಇದನ್ನ ಇನ್ವೆಸ್ಟಿಗೇಟ್ ಮಾಡೋದ್ರಲ್ಲಿ ಯಾವುದೇ ಹುರುಳಿರೋದಿಲ್ಲ ಅನ್ನೋದು ನನ್ನ ಅನಿಸಿಕೆ ಎಂದು ಸ್ಥಳಕ್ಕೆ ಆಗಮಿಸಿದ್ದ ಸಿಬ್ಬಂದಿ ಹೇಳಿದ.ನೋಡಯ್ಯ ಇನ್ನೊಮ್ಮೆ ಪರಿಶೀಲನೆ ನಡೆಸಿ ಕೇಸ್ ಕ್ಲೋಸ್ ಮಾಡ್ಬಿಡು.ಅಂದಹಾಗೆ ಅಪ್ಪಯ್ಯ ದೀಕ್ಷಿತ್ ಅವರು ಒಳ್ಳೆಯ ಮನುಷ್ಯ ಅವರಿಗೆ ಸಮಾಜದಲ್ಲಿ ಘನತೆ ಗೌರವ ಇದೆ.ಅಕಸ್ಮಾತ್ ಅವರ ಮನೆಯವರು ಕೇಸ್ ಕ್ಲೋಸ್ ಮಾಡೋದರ ಬಗ್ಗೆ ತಕರಾರು ಮಾಡಿದರೆ ಅವರ ವಿರುದ್ಧ ಮಾತಾಡೋಕ್ ಹೋಗ್ಬೇಡ.ನಮ್ಮ ಸಾಹೇಬ್ರತ್ರ ಮಾತಾಡಿ ಅಂತ ಹೇಳ್ಬಿಡು ಎಂದು ಇನ್ಸ್ಪೆಕ್ಟರ್ ಹೇಳಿದರು.