ಪರಿತಪಿಸು ನೀನೊಮ್ಮೆ.
ಮಾಹಿತಿ ಸಂಗ್ರಹಿಸುವ ಟೀಮ್ ಅದಾಗಲೇ ಬಂದಿತ್ತು.ಅಲ್ಲಿದ್ದ ಪ್ರತಿಯೊಂದೂ ಸಂಗತಿಗಳ ಕೂಲಂಕಷ ಪರಿಶೀಲನೆ ನಡೆಸಲಾಯಿತು.ಸುಳಿವುಗಳನ್ನು ಜೇಬಿನಲ್ಲಿ ಹಾಕುತ್ತ. ಅದೊಮ್ಮೆ ಕೇಸ್ ಕ್ಲೋಸ್ ಮಾಡೋದಾದ್ರೂ ಇಂತಹ ಸಂದರ್ಭದಲ್ಲಿ ಪೋಸ್ಟ್ ಮಾರ್ಟೆಮ್ ಮಾಡುವುದು ಅನಿವಾರ್ಯ. ಹೆಣದ ಸಾಗಾಣಿಕೆ ನಡೆಸಲಾಯಿತು. ಸತ್ತು ಬಿದ್ದ ಡ್ರೈವರ್ ಗೆ ಅದ್ಯಾರೂ ಇರಲಿಲ್ಲ. ಅವನೊಬ್ಬ ಒಬ್ಬಂಟಿ .ಅವನ ಡೆಡ್ ಬಾಡಿಯನ್ನೂ ಪೋಸ್ಟ್ ಮಾರ್ಟೆಮ್ ಗೆ ಕಳುಹಿಸಲಾಯಿತು. ನೋಡ ನೋಡುತ್ತಿದ್ದಂತೆಯೇ ಸಮಯ ಕಳೆಯುತ್ತಿತ್ತು.ಅಮ್ಮ ನಿಮ್ಮದೊಂದು ಸಹಿ ಬೇಕು ಎಂದು ಸಹಿ ತೆಗೆದುಕೊಂಡ. ಸ್ಥಳ ಬಂಧನದಲ್ಲಿರಿಸಿ ಪೋಲಿಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾ ಅಲ್ಲಿಂದ ನಡೆದರು. ಸ್ಥಳ ಖಾಲಿಯಾಗಿತ್ತು.ಅಪ್ಪಯ್ಯ ದೀಕ್ಷಿತ್ ಅವರ ನೆನಪುಗಳು ಸ್ಥಳದಾಕ್ರಮಣಕ್ಕೆ ಮುಂಚೂಣಿಯಲ್ಲಿ ನಿಂತಿದ್ದವು.ದೀಕ್ಷಿತ್ ಅವರ ಪತ್ನಿ ಮತ್ತವರ ಮಗ ಜಾಗದಲ್ಲೇ ಇದ್ದರು.ವಿಧಿ ಜೀವನದಲ್ಲಿ ಆಟಗಳ ಸರಮಾಲೆಯನ್ನು ಬಿಡದೆ ಆಡಿತ್ತು.ಅವರಿಬ್ಬರೂ ಅಲ್ಲಿಂದ ಹೊರಟರು.ಮನೆಯ ದಾರಿ ಬಹು ದೂರ ಎನಿಸುತ್ತಿತ್ತು.ಅಲ್ಲಿಂದ ಮನೆಯ ದಾರಿಯವರೆಗೂ ನಿಶ್ಯಬ್ದ ಅವರನ್ನು ಆವರಿಸಿತ್ತು.ಮನಸ್ಸಿನಲ್ಲಲ್ಲ ಬಾಹ್ಯ ಪ್ರಪಂಚಕ್ಕಷ್ಟೇ.ಮನಸ್ಸು ಬಿಡದೆ ಯೋಚಿಸುತ್ತ ತರ್ಕಿಸುತ್ತಲಿತ್ತು.
ಅಲ್ಲಾ ಕಣ್ರೋ ನಮ್ಮನ್ನ ಬಿಟ್ಟು ಹೋಗಿ ನಮ್ಗೆ ಏನಾದ್ರೂ ಹಾಕಿ ಕೊಟ್ಬಿಟ್ರೆ? ಮೊದಲೇ ಅವನಿಗೆ ನಮ್ಮ ಮೇಲೆ ಡೌಟ್.ಅದರಲ್ಲೂ ನಾವು ಹಣ ಮುಚ್ಚಿಟ್ಟಿದೀವಿ ಅನ್ನೋ ಸಂಶಯ ಬೇರೆ.ಮಾಡದೇ ಇರೋ ತಪ್ಪನ್ನ ನಮ್ಮ ಮೇಲೆ ಹಾಕಿ ಫ್ರೆಂಡ್ ಶಿಪ್ ಮರೆತು ಹೋದ. ಆದರೆ ಅವನು ನಮ್ಮ ಬಗ್ಗೆ ಹೇಳಿ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋ ಕಟುಕ ಅಲ್ಲ ಕಣ್ರೋ.ಅವನು ಹುಟ್ದಾಗಿಂದ ನೋಡಿದೀವಿ.ಅವನು ಏನು ಅಂತ ನಮಗೆಲ್ಲ ಗೊತ್ತೇ ಇದೆ. ಅವನು ಎಲ್ಲಿ ಹೋಗಿರ್ಬೋದು ಅನ್ನೋ ಸುಳಿವೂ ನಮಗಿಲ್ಲ. ಅವನನ್ನು ಬಿಟ್ಟು ಇರೋಕೂ ನಮ್ಮಿಂದ ಆಗ್ತಾ ಇಲ್ಲ.ಅವನು ವಾಪಾಸು ಬರ್ತಾನೆ ಅನ್ನೋ ನಂಬಿಕೆ ಇದೆ ಕಣ್ರೋ.ಅಕಸ್ಮಾತ್ ಅವನು ವಾಪಾಸು ಬರಲಿಲ್ಲ ಅಂದರೂ ಅವನು ಎಲ್ಲಿದ್ದರೂ ಖುಶಿಯಿಂದ ಇರಲಿ ಅನ್ನೋದೊಂದೇ ನಮ್ಮ ಕೋರಿಕೆ.ಜಗತ್ತಿನಲ್ಲಿ ಯಾರಿಗೂ ಬೇಡ ಈ ಸ್ನೇಹ ವೈರತ್ವ ಆಗಿ ಪರಿವರ್ತನೆ ಹೊಂದುವ ಕಷ್ಟ.ನಾವು ಯಾವಾಗ ಸಾಯ್ತೀವೋ ಏನೋ ವಿಧಿಗೆ ಬಿಟ್ಟಿದ್ದು.ಆದರೆ ಸಾಯೋಕಿಂತ ಮುಂಚೆ ಅಥವಾ ನಾವು ಸತ್ತ ಮೇಲಾದರೂ ಅವನಿಗೆ ನಮ್ಮಿಂದ ದ್ರೋಹ ಆಗಿಲ್ಲ ಎನ್ನೋ ಒಂದು ಸತ್ಯ ತಿಳಿದರೆ ಸಾಕು.
ಪೋಲಿಸ್ ಅಧಿಕಾರಿಗಳು ಪರಿಶೀಲನೆ ನಡೆಸುವ ಆರಂಭದಲ್ಲಿಯೇ ಮಾಹಿತಿ ಕಲೆಹಾಕಿದ ಟೀಮ್ ನಿಂದ ಮಾಹಿತಿ ಬಂದಿತ್ತು.ಸುಳಿವುಗಳ ಪ್ರಕಾರ ಡ್ರೈವರ್ ಅಪ್ಪಯ್ಯ ದೀಕ್ಷಿತ್ ಕೊಲೆ ಮಾಡಿರೋದು ಎನ್ನುವುದಕ್ಕೆ ಸಿಕ್ಕ ಸುಳಿವುಗಳೇ ಸಾಕಾಗಿತ್ತು.ಡ್ರೈವರ್ ಕೊಲೆ ನಡೆಸಿದ್ದು ಎನ್ನುವುದು ಬಲವಾಗಿ ತೋರಿಸುತ್ತಲಿತ್ತು.ಪೋಸ್ಟ್ ಮಾರ್ಟೆಮ್ ಮಾಡುವ ಅನಿವಾರ್ಯ ಇಲ್ಲ ಎಂದು ಮೇಲಿನ ಅಧಿಕಾರಿಗಳು ಯೋಚಿಸಿದರು.ಡೆಡ್ ಬಾಡಿಯನ್ನು ಅವರ ಮನೆಗೆ ಕಳುಹಿಸಲಾಯಿತು. ಕೇಸ್ ಅಲ್ಲಿಗೇ ಕ್ಲೋಸ್ ಆಯಿತು.ಅಪ್ಪಯ್ಯ ದೀಕ್ಷಿತ್ ಅವರ ನೆನಪುಗಳು ಮಾತ್ರ ಕೇಸ್ ಫೈಲಿನಲ್ಲಿ ಅಚ್ಚಾಗಿ ಉಳಿದಿತ್ತು.
ಇತ್ತ ಮನೆಗೆ ಬಂದು ತಲುಪಿದ್ದರು.ಮನೆಯೇ ಮಸಣವಾಗಿತ್ತು.ಅಪ್ಪಯ್ಯ ದೀಕ್ಷಿತ್ ಅವರ ಡೆಡ್ ಬಾಡಿಯು ಸ್ವಲ್ಪ ಸಮಯದ ಅಂತರದಲ್ಲಿ ಅವರ ಮನೆಯನ್ನು ಸೇರಿತ್ತು.ಡ್ರೈವರ್ ಡೆಡ್ ಬಾಡಿ ಅಲ್ಲಿಯೇ ಶವಾಗಾರದ ಪಾಲಾಯಿತು.ಧೀರಜ್ ಸ್ವಲ್ಪ ಸಮಯ ಅಲ್ಲಿಯೇ ಉಳಿದು ಅಲ್ಲಿಂದ ಹೊರಟ.ಮನೆಗೆ ಹೋಗಿ ಮತ್ತೆ ವಾಪಾಸ್ಸಾಗಲು ಚಿಕ್ಕ ಯಜಮಾನ್ರಿಂದ ಆರ್ಡರ್ ಆಗಿತ್ತು. ದೀಕ್ಷಿತ್ ಅವರ ಧರ್ಮ ಪತ್ನಿಯಾಗಲೀ ಅವರ ಮಗನಾಗಲೀ ಆ ಲಾಕರ್ ರೂಮ್ ನತ್ತ ಹೋಗಿರಲಿಲ್ಲ.ಸಧ್ಯಕ್ಕೆ ಹೋಗುವ ಪ್ರಸಂಗ ಬಂದಿರಲಿಲ್ಲ.
ಅದೇನೋ ಗೊತ್ತಿಲ್ಲ. ಈ ನಾಲ್ವರು ಖದೀಮರ ಬಾಳಿನಲ್ಲಿ ವಿಧಿ ಆಟವಾಡಿತ್ತು.ಅವರು ಅಂದುಕೊಂಡ ಯೋಜನೆಗಳು ತಿರುಚಿ ಹೋಗಿತ್ತು.ಆದರೂ ಅವರಿಗೆ ಶಿಕ್ಷೆ ಆಗಲಿಲ್ಲ. ಕೊಲೆಯ ಆಪಾದನೆಗಳು ಅವರನ್ನು ತಪ್ಪಿತಸ್ಥರನ್ನಾಗಿಸಲಿಲ್ಲ. ಹಳೆಯ ಕಾಲದ ಜನರ ಒಂದು ಮಾತಿದೆ."ತಪ್ಪಿನ ಅರಿವಾಗಿ ಪರಿತಪಿಸುವುದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ ". ಜನರು ಹಳಬರಾದರೂ ಮಾತು ಅದೆಂದಿದಗೂ ಶಾಶ್ವತ.