ಶವ ಸಂಸ್ಕಾರ
ಧೀರಜ್ ಮನೆಗೆ ಬಂದವನೇ ಮಗನನ್ನು ಮುದ್ದಿನಿಂದ ಎತ್ತಾಡಿಸಿದ. ಕ್ಷಮತೆಯನ್ನು ಎತ್ತಿ ತೋರುತ್ತಾ,ಪತಿಗೆ ಅವಶ್ಯ ಇರುವ ಎಲ್ಲ ವ್ಯವಸ್ಥೆಗಳಿಗೆ ಪತ್ನಿ ಕಾರಣಳಾದಳು.ಸುಮ್ಮನೆ ಈತ ಹೋಗಿ ಗಢದ್ದಾಗಿ ನಿದ್ರೆ ಹೊಡೆದ.ತುಂಬು ನಿದ್ರೆಯದು ಅವನ ಜೀವನವನ್ನು ಮರೆಸಿ ಸ್ತಬ್ಧವಾಗಿಸಿತ್ತು.ಆಯಾಸ ಮತ್ತು ನಿದ್ರೆಯಿಲ್ಲದೇ ರಾತ್ರಿಯಿಡೀ ಎಚ್ಚರವಿದ್ದ ಇವನಿಗೆ ನಿದ್ರೆ ಪೂರ್ಣವಾಗಿ ಆವರಿಸಿತ್ತು. ಅವಲಂಬಿಸಿ ನಿಂತ ಅವಳು ನಿದ್ರೆ ಹೋಗಿದ್ದನ್ನು ಗಮನಿಸಿ ನಿಶ್ಯಬ್ದ ವಾಗಿ ಕಾರ್ಯ ನಿರ್ವಹಿಸುತ್ತಿದ್ದಳು.
ಅಪ್ಪಯ್ಯ ದೀಕ್ಷಿತ್ ಅವರನ್ನು ನೋಡಲು ನೂರಾರು ಜನರ ದಂಡು ಹರಿದು ಬಂತು.ಆಕ್ರಂದನ ಅಳುವಿನ ಕೂಗು ಮುಗಿಲು ಮುಟ್ಟಿತ್ತು. ದೀಕ್ಷಿತ್ ಅವರು ಮಾಡಿದ್ದ ಪುಣ್ಯ ಕಾರ್ಯಗಳೇ ಜನರ ಬಾಯಿಯಲ್ಲಿ ಹರಿಯುತ್ತಿತ್ತು. ಅವರ ಸಾವಿಗೆ ಅದರಲ್ಲೂ ಈ ರೀತಿ ಸಾವು ಅವರಿಗೆ ತೃಪ್ತಿ ತಂದಿರಲಿಲ್ಲ.ಸಜ್ಜನರ ಸಾವಿನಲ್ಲಿ ಸಜ್ಜನಿಕೆ ಒಳಗೊಂಡಿಲ್ಲ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿತ್ತು.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೂಚಿಸಿದವರಿನ್ನಿಷ್ಟು. ಸಂಬಂಧಿಕರು ಸಮಾಧಾನ ಸೂಚಿಸುವ ನೆಪದಲ್ಲಿ ಮನೆಯ ಹಣವನ್ನು ತಮ್ಮದಾಗಿಸುವ ಪ್ಲಾನ್ ನಲ್ಲಿದ್ದರು.ದೀಕ್ಷಿತ್ ಅವರ ಪತ್ನಿಯ ಸಹೋದರರು ಹಣ ಕಬಳಿಸುವ ಯೋಜನೆಯಿಂದ ತಂಗಿಗೆ ತವರು ಮನೆಗೆ ಬಂದುಳಿಯುವಂತೆ ಹೇಳಿ ವಿಷಯ ಪ್ರಸ್ತಾಪ ಮಾಡಿದರು.ನಾವದೆಲ್ಲಿಗೂ ಬರುವುದಿಲ್ಲ ಈ ಊರು ಈ ಜನ,ನಂಬಿದವರನ್ನು ಬಿಟ್ಟು ನಾನದೆಲ್ಲೂ ಬರುವುದಿಲ್ಲ.ಎಂದು ಅವಳು ಪ್ರತಿಕ್ರಿಯೆ ನೀಡಿದಳು.ಮತ್ತೆ ಮುಂದುವರಿದ ಸಹೋದರರು ಇದೇ ಸರಿಯಾದ ಸಮಯ,ಅಪ್ಪಯ್ಯ ದೀಕ್ಷಿತ್ ಅವರ ಸರ್ವ ಸ್ಥಾನಕ್ಕೂ ಮಗನಿಗೆ ಹಸ್ತಾಂತರ ಮಾಡುವ ಕಾರ್ಯ ಆಗಲಿ.ಹೇಗೂ ಹಿರಿಯರು ಎಂದೆನಿಸಿಕೊಂಡ ನಾವೆಲ್ಲ ಒಟ್ಟು ಸೇರಿದ್ದೇವೆ.ಅದಕ್ಕೆ ಅಷ್ಟೇನೂ ಅರ್ಜೆಂಟ್ ಇಲ್ಲ.ಮೊದಲು ಆಗಬೇಕಾದ ಶಾಸ್ತ್ರಗಳು ನಡೆಯಲಿ ಎಂದಳು.
ಧೀರಜ್ ಗೆ ಎಚ್ಚರವಾದಾಗ ಅವನು ಗಡಿಬಿಡಿಯಿಂದ ಹೋಗಿ ಸಮಯ ನೋಡುತ್ತಾನೆ.ತಾನು ಹೆಚ್ಚು ಹೊತ್ತು ಮಲಗಿದ್ದು ತಪ್ಪಾಯಿತು.ಯಜಮಾನ್ರ ಮನೆಗೆ ಹೋಗ್ಬೇಕು ಎನ್ನುವ ತರಾತುರಿಯಲ್ಲಿ ಹೆಂಡತಿಗೂ ನಾಲ್ಕು ಮಾತು ಹೇಳಿದ.ನೀನಾದರೂ ಎಚ್ಚರಿಸಬಾರದಾ? ನೀವು ನಿದ್ರೆ ಹೋಗಿದ್ದರೆ ನಾನ್ಯಾಕೆ ಎಚ್ಚರಿಸಲಿ! ಅದರಲ್ಲೂ ಪಾಪ ರಾತ್ರಿಯಿಡೀ ನಿದ್ರೆ ಮಾಡಿಲ್ಲ ನೀವು ಅನ್ನೋ ಕಾಳಜಿಯಿಂದ ನಾನು ಏಳಿಸಲಿಲ್ಲ.ನೀವು ನೋಡಿದ್ರೆ ನನಗೆ ಬೈತಾ ಇದೀರಲ್ಲ.!? ಎಲ್ಲ ನಂದೇ ತಪ್ಪು ಎಂದು ಹೇಳುತ್ತಾ ಹೋಗಿ ಶರ್ಟ್ ಹಾಕುತ್ತಾ ಮಗನಿಗೆ ಮುತ್ತು ಕೊಟ್ಟು ಹೊರಟು ಬಂದ.ದಾರಿಯ ಮಧ್ಯದಲ್ಲಿ ದೀಕ್ಷಿತ್ ಅವರ ಶವವನ್ನು ಮಸಣಕ್ಕೆ ಸಾಗಿಸುವಾಗ ಎದುರಾದ.ಅವರಲ್ಲೇ ಇವನೂ ಒಬ್ಬನಾಗಿ ಒಳಗೊಂಡು ನಿಂತ. ಮಗನಾದ ನಂದಮುರಿ ಕಾರ್ಯವನ್ನು ಸಮರ್ಥವಾಗಿ ಮುಗಿಸಿದ.ಅಪ್ಪಯ್ಯ ದೀಕ್ಷಿತ್ ಅವರ ಚಿತೆ ಉರಿಯುತ್ತಲಿತ್ತು. ಹೊರಟು ಬಂದರು ಮನೆಗೆ.ಉರಿಯುತ್ತಿದ್ದ ಬೆಂಕಿಯನ್ನು ಆರಿಸುವ ಬದಲು ಸಹೋದರರು ಮತ್ತೊಮ್ಮೆ ವಿಷಯ ಪ್ರಸ್ತಾಪ ಮಾಡಿದರು.
ನಂದಮುರಿ ಹೋಗಿ ಆ ಲಾಕರ್ ನಲ್ಲಿ ಇರೋ ಕಾಗದಪತ್ರಗಳನ್ನು ತೆಗೆದುಕೊಂಡು ಬಾ ! ಎಂದು ತಾಯಿ ಹೇಳಿದಳು.ನಂದಮುರಿ ಲಾಕರ್ ನತ್ತ ನಡೆದ.ಲಾಕರ್ ಒಡೆಯಲಾಗಿತ್ತು.ಒಡೆದ ಲಾಕರ್ ಹಾಗೆಯೇ ತೆಗೆದು ನೋಡಿದ.ಲಾಕರ್ ಖಾಲಿಯಾಗಿತ್ತು.ಓಡಿ ಬಂದು ವಿಷಯ ತಿಳಿಸಿದ.ಧೀರಜ್ ಗೂ ವಿಷಯ ತಿಳಿಯಿತು.ಧೀರಜ್ ಗೆ ಒಳ ಬರುವಂತೆ ಹೇಳಿ ಕಳಿಸಿದಳು.ಇತ್ತ ಪೋಲಿಸ್ ಇಲಾಖೆಗೆ ಕಾಲ್ ಮಾಡಲಾಯಿತು. ಧೀರಜ್ ತಪ್ಪಿತಸ್ಥ ಎನ್ನುವಂತೆ ನೆರೆದಿದ್ದವರು ನೋಡುತ್ತಿದ್ದರು.ಧೀರಜ್ ಆರೋಪಿಯ ಸ್ಥಾನದಲ್ಲಿ ನಿಂತಿದ್ದ.ಅವನ ನೀಯತ್ತು ಅವನನ್ನೇ ನುಂಗಿ ಹಾಕಿದ್ದು ಅವನಿಗೆ ರೋಷ ತರಿಸಿತ್ತು.ಪೋಲಿಸ್ ಅಧಿಕಾರಿಗಳು ಬಂದು ಧೀರಜ್ ಕರೆದೊಯ್ದರು.