ಇಂಟರೋಗೇಷನ್
ಅರವಿಂದ್ ನನ್ನು ಇಂಟರೋಗೇಷನ್ ರೂಮ್ ನಲ್ಲಿ ಕೂರಿಸಲಾಗಿತ್ತು.ಇನ್ಸ್ಪೆಕ್ಟರ್ ಅವನೆದುರೇ ಕೂತಿದ್ದರು. ಇನ್ಸ್ಪೆಕ್ಟರ್ ಶುರು ಮಾಡಿದರು ಏನಯ್ಯ ನೋಡೋಕೆ ಒಳ್ಳೆಯ ದೊಡ್ಡ ಜನ ಕಂಡಹಾಗೆ ಕಾಣ್ತೀಯ ಮಾಡೋದು ನೋಡಿದ್ರೆ ಕ್ರೈಮ್.ಸರ್ ಏನ್ ಹೇಳ್ತಾ ಇದೀರಾ ನನಗೊಂದೂ ಅರ್ಥಾ ಆಗ್ತಾ ಇಲ್ಲ ಅರವಿಂದ್ ನುಡಿದ.ನಿನ್ನೆ ರಾತ್ರಿ ಬಾರ್ ನಲ್ಲಿ ಚೆನ್ನಾಗಿ ಕುಡಿದು ಒಬ್ಬ ಯುವಕನ ಕೊಲೆ ಮಾಡಿದೀಯ ಅಂತ ಕಂಪ್ಲೇಂಟ್ ಬಂದಿದೆ.ನಿನ್ನ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.ಅದ್ಯಾವುದೇ ಕೇಸ್ ಬರಲಿ ಕಂಪ್ಲೇಂಟ್ ಬರಲಿ ಎಫ್ ಐ ಅರ್ ಹಾಕಿ ಅಂದರೆ ಫರ್ಸ್ಟ್ ಇನ್ಪೋರ್ಮೇಷನ್ ರಿಪೋರ್ಟ್ ದಾಖಲಿಸಿ,ಕೋರ್ಟ್ ಗೆ ಹಾಜರುಪಡಿಸುವುದು ಕಾನೂನು.ಕೋರ್ಟ್ ನಲ್ಲಿ ಸಾಕ್ಷ್ಯಾಧಾರಗಳ ಮೇಲೆ ನ್ಯಾಯಾಧೀಶರು ಅಪರಾಧಿಯನ್ನು ಏನು ಮಾಡಬೇಕೆಂದು ನಿರ್ಣಯಿಸುತ್ತಾರೆ..ಅಪರಾಧವನ್ನು ಕೂಲಂಕಷವಾಗಿ ಆಲಿಸಿ ಅಪರಾಧಿಯು ಸಾಧು ಎಂದು ಸೂಚ್ಯವಿದ್ದರೆ ಅವನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ. ಆದರೆ ಅವನನ್ನು ವಿಚಾರಣೆಗೆ ಒಳಪಡಿಸಿ ಎಂದು ಪೋಲಿಸ್ ಅಧಿಕಾರಿಗಳು ನ್ಯಾಯಾಧೀಶರಿಗೆ ಬೇಡಿಕೆ ಇಡುತ್ತಾರೆ.ಇನ್ನೂ ಈ ಕೇಸ್ ನಲ್ಲಿ ಸಂಶಯಾಸ್ಪದ ವ್ಯಕ್ತಿಯಿದ್ದರೆ ಅವನನ್ನು ಕೋರ್ಟ್ ಗೆ ಹಾಜರು ಪಡಿಸಲು ಮತ್ತು ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿಯಾಗಿ ಪೋಲಿಸ್ ಅಧಿಕಾರಿಗಳಿಗೆ ನ್ಯಾಯಾಂಗವು ವಾರೆಂಟ್ ನೀಡುತ್ತದೆ.
ಅರವಿಂದ್ ದಿಗಿಲು ಹೊಡೆದಂತಾದ ಅವನು ಕುಡಿದ ಅಮಲಿನಲ್ಲಿದ್ದರೂ ಅವನಿಗೆ ಎಚ್ಚರ ತಪ್ಪಿರಲಿಲ್ಲ ಮೈ ಮೇಲೆ ಪರಿಜ್ಞಾನ ಇತ್ತು.ಆ ಯುವಕನೊಂದಿಗೆ ಜಗಳ ಮಾಡಿದ್ದೂ ನೆನಪಿನಲ್ಲಿ ಇತ್ತು.ಆದರೆ ಅವನಿಗೆ ಇವನೇನೂ ಮಾಡಿಲ್ಲ ಎಂಬ ಗಾಢವಾದ ಆತ್ಮವಿಶ್ವಾಸ ಇವನಲ್ಲಿತ್ತು.ಹಿಂದಿನ ದಿನ ಏನಾಗಿತ್ತು ಎಂಬುದರ ವಿವರಣೆ ಕೊಡಲು ಇನ್ಸ್ಪೆಕ್ಟರ್ ಅರವಿಂದ್ ಗೆ ಹೇಳಿದರು.ಅರವಿಂದ್ ಹೇಳಿಕೆ ಬರೆದುಕೊಳ್ಳಲು ಶುರು ಮಾಡಿದರು.ಅವತ್ತು ಬೆಳಿಗ್ಗೆ ಎಂದಿನಂತೆ ಅರವಿಂದ್ ಸಮಯ ೭ಕ್ಕೆ ಎದ್ದು ದಿನವಹಿ ಕಾರ್ಯಗಳನ್ನು ಮುಗಿಸಿ ೮.೩೦ಕ್ಕೆ ಮನೆಯಿಂದ ಕೆಲಸಕ್ಕೆ ಹೊರಟು, ಅವನ ಕೆಲಸವನ್ನು ಸಂಜೆ ೫ರ ತನಕ ಮುಗಿಸಿ ದಿನನಿತ್ಯದ ಹಾಗೆಯೇ ಮಧ್ಯಸೇವನೆಗೆಂದು ಬಾರ್ ಗೆ ಹೊರಟ. ಅವನೆಲ್ಲ ಸ್ನೇಹಿತರು ಸೇರುವ ಜಾಗವದು.ಕಾಲೇಜ್ ನಿಂದ ಆ ನಾಲ್ವರು ಇವನಿಗೆ ಪರಿಚಯ.ಕೆಲಸದ ನಿಮಿತ್ತ ಬೇರೆ ಬೇರೆ ದಾರಿ ಹುಡುಕಿಕೊಂಡಿದ್ದರೂ ಸಂಜೆ ಅವರೆಲ್ಲ ಕುಡಿಯುವ ನೆಪದಲ್ಲಿ ಸೇರುತ್ತಿದ್ದರು.ಅವತ್ತೂ ಹಾಗೆಯೇ ಸೇರಿದಾಗ ಆಗಿದ್ದೇನು ಎಂಬುದರ ಸಂಪೂರ್ಣ ವಿಷಯವನ್ನೂ ಹೇಳಿದ, ಮುಂದುವರಿದು ಸರ್ ನಾವು ಆ ಯುವಕನನ್ನು ಅಡ್ಡಗಟ್ಟಿ ಜಗಳ ಮಾಡಿದ್ದಂತೂ ನಿಜ ಆದರೆ ಕೊಲೆ ಮಾಡೋ ಲೆವೆಲ್ ಗೆ ನಾವ್ಯಾರೂ ಇಳಿದಿಲ್ಲ ಎಂದು ನುಡಿದ.ಇವನ ಬಗ್ಗೆ ಎಲ್ಲ ದಾಖಲೆಗಳನ್ನು ದಾಖಲಿಸಲಾಯಿತು. ಸರ್ ಕಂಪ್ಲೇಂಟ್ ಏನು ಎಂದು ಇನ್ಸ್ಪೆಕ್ಟರ್ ಗೆ ಕೇಳುತ್ತಾನೆ.
ಎಫ್.ಐ.ಆರ್ ಕ್ರಿಮಿನಲ್ ಪಿನಲ್ ಕೋಡ್ ನ ಸೆಕ್ಷನ್ ೧೫೪ ಅಡಿಯಲ್ಲಿ. ಮೇಲಿನ ಭಾಗದಲ್ಲಿ ಪೋಲಿಸ್ ಠಾಣೆಯ ವಿವರ ಇರುತ್ತದೆ.ಉದಾಹರಣೆಗೆ ಯಾವ ಪೋಲಿಸ್ ಠಾಣೆ ಜಿಲ್ಲೆಯ ಹೆಸರು ಇನ್ನಿತರೆ.ಕ್ರೈಮ್ ನಡೆದ ಸಮಯ ಸುಮಾರು ರಾತ್ರಿ ೧೧ ರ ವೇಳೆಯಲ್ಲಿ.ಅಮರ್ ಅನ್ನೋ ವ್ಯಕಿಯು ಮೊದಲು ಪೋಲಿಸ್ ಠಾಣೆಗೆ ಕೊಲೆಯ ಮಾಹಿತಿಯನ್ನು ರಾತ್ರಿ ಸುಮಾರು ೧ ಘಂಟೆಯ ವೇಳೆಗೆ ತಿಳಿಸಿದ್ದರು.ರಾತ್ರಿ ಡ್ಯೂಟಿಯ ಮೇಲಿದ್ದ ಕಾನ್ಸ್ಟೇಬಲ್ ಈ ರಿಪೋರ್ಟ್ ಬರೆದುಕೊಂಡು ಮಾಹಿತಿ ತಿಳಿಸಿದ ಅಮರ್ ಅವರ ವಾಸಸ್ಥಳ ಮತ್ತಿತರ ವಿವರಗಳನ್ನು ಬರೆದುಕೊಂಡಿದ್ದರು.ತದನಂತರದಲ್ಲಿ ಕ್ರೈಮ್ ನಡೆದ ಜಾಗ ಅದರ ದಿಕ್ಕು ಮತ್ತು ಪೋಲಿಸ್ ಠಾಣೆಯಿಂದ ಕ್ರೈಮ್ ನಡೆದ ಜಾಗಕ್ಕೂ ಇರುವ ದೂರ, ಕ್ರಿಮಿನಲ್ ವಾಸಸ್ಥಳಗಳನ್ನೊಳಗೊಂಡಿರುತ್ತದೆ. ಅಮರ್ ತಿಳಿಸಿದ ವಿಷಯದ ಮೇರೆಗೆ ಸ್ಥಳಕ್ಕೆ ಹೋದ ಪೋಲಿಸ್ ಅಧಿಕಾರಿಗಳು ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿ ಅಲ್ಲಿಯೇ ಹತ್ತಿರದಲ್ಲಿರುವ ಬಾರ್ ಅನ್ನು ನೋಡಿ ಬಾರ್ ಮಾಲೀಕನಿಗೆ ಕರೆಮಾಡಿದ್ದರು.ಬಾರ್ ಮಾಲೀಕ ಜಗಳದ ವಿಷಯ ಹೇಳಿ ಅರವಿಂದ್ ಅವರ ವಿವರ ತಿಳಿಸಿದ.ಸಂಶಯಾಸ್ಪದ ವ್ಯಕ್ತಿ ಆಗಿದ್ದರಿಂದಲೇ ಮೊದಲು ಅವನ ಮನೆಗೆ ಭೇಟಿ ನೀಡಿ ಪೋಲಿಸ್ ಅಧಿಕಾರಿಗಳು ಅವನನ್ನು ಠಾಣೆಗೆ ಕರೆತಂದಿದ್ದರು.ಪೋಲಿಸ್ ಅಧಿಕಾರಿಗಳೇ ಹೀಗೆ ತಮ್ಮ ಚಾಣಾಕ್ಷತನದಿಂದ ಇನ್ನೂ ವಿಷಯ ಪೂರ್ತಿ ಗೊತ್ತಿರದೇ ಇದ್ದರೂ ಆ ವ್ಯಕ್ತಿಯೇ ಅಪರಾಧಿ ಎಂದು ಚುಚ್ಚಿ ಮಾತನಾಡಿ ಅವನ ರೋಷಾವೇಷಗಳನ್ನು ಕೆದಕುವ ಪ್ರಯತ್ನ ಮಾಡುತ್ತಾ ಇರುತ್ತಾರೆ.ರಾಮಣ್ಣ ನೀವು ಹೋಗಿ ಆ ಕಂಪ್ಲೇಂಟ್ ಕೊಟ್ಟವನ ಮನೆಗೆ ಹೋಗಿ ಅವನನ್ನು ಎಳೆದುಕೊಂಡು ಬರ್ರೀ ಎಂದು ಇನ್ಸ್ಪೆಕ್ಟರ್ ನವೀನ್ ಸೂಚಿಸಿದರು.ರಾಮಣ್ಣ ಆಯ್ತು ಸರ್ ಅಂತ ಅಮರ್ ಮನೆಯತ್ತ ಜೀಪ್ ತಿರುಗಿಸಿದರು.