ರಚನಾ ವ್ಯೂಹ
ರಾಮಣ್ಣ, ನನ್ನ ಏನು ಸಾಧಾರಣ ಅಂದುಕೊಂಡಿದೀರಾ ಹೇಗೆ? ನೋಡಿ ಅಲ್ಲಿ ಆ ಅಂಗಡಿಯ ಸಿಸಿ ಟಿವಿ ಫೂಟೆಜ್ ನೋಡಿದ್ರೆ ಇವುಗಳಿಗೆಲ್ಲ ಉತ್ತರ ಸಿಗುತ್ತೆ, ನಡೀರಿ ಹೋಗೋಣ ಎಂದು ಇನ್ಸ್ಪೆಕ್ಟರ್ ರಾಮಣ್ಣನನ್ನು ಜೊತೆಗೂಡಿ ನಡೆದರು. ನಿನ್ನೆಯ ಸಿಸಿ ಟಿವಿ ಫುಟೆಜ್ ತೆಗೆದು ತೋರಿಸು ಎಂದು ಒಳಗೆ ಬರುತ್ತಿದ್ದಂತೆಯೇ ಇನ್ಸ್ಪೆಕ್ಟರ್ ಹೇಳಿದರು.ಸರ್ ಅದು ಮಾಲೀಕರ ಪರ್ಮೀಶನ್ ಇಲ್ದೇ ನಾನು ಹಾಗೇನೂ ಕೊಡೋಕಾಗಲ್ಲ ಒಂದೇ ಒಂದು ನಿಮಿಷ ಒಳಗೆ ಹೋಗಿ ನಮ್ಮ ಮಾಲೀಕರನ್ನು ಕರೆದುಕೊಂಡು ಬರ್ತೀನಿ ಎಂದು ಒಳಗೆ ಹೋದ.ಒಳಗೆ ಹೋಗಿ ಸರ್ ಪೋಲಿಸ್ ಇನ್ಸ್ಪೆಕ್ಟರ್ ಬಂದಿದಾರೆ ನಿನ್ನೆ ಸಿಸಿ ಟಿವಿ ಪೂಟೆಜ್ ಕೇಳ್ತಾ ಇದಾರೆ.ನಿಮ್ಮ ಒಪ್ಪಿಗೆ ಇಲ್ಲದೇ ಅದೆಲ್ಲ ಏನೂ ಕೊಡೋಕಾಗಲ್ಲ ಅಂತ ಹೇಳಿ ಬಂದೆ ನೀವೇ ಬಂದು ನೋಡಿ ಏನು ಅಂತ ಎಂದು ಹೇಳಿದ.ಮಾಲೀಕ ನೋಡಿದರೆ ಹೊಟ್ಟೆ ಮುಂದೆ ಬಂದು ಜಗತ್ತಿನ ಆಗು ಹೋಗು ತನಗೆ ಸಂಬಂಧವಿಲ್ಲವೇನೋ ಎಂಬಂತೆ ಕೂತಿದ್ದ.
ಇನ್ಸ್ಪೆಕ್ಟರ್ ಬಂದಿರೋ ವಿಷಯ ತಿಳಿಯುತ್ತಿದ್ದಂತೆ, ಕೈ ಕುರ್ಚಿಯ ಮೇಲೆ ಇಟ್ಟು ದೇಹದ ಭಾರವನ್ನು ಅದರ ಮೇಲೆ ಹಾಕಿ ಏಳುವ ಪ್ರಯತ್ನ ನಡೆಯಿತು.ಕಷ್ಟದಿಂದ ಎದ್ದುನಿಂತು ಬೇಗಬೇಗನೇ ಹೊರಗೆ ಬಂದ. ಕ್ಷಮಿಸಿ ಸರ್ ಹೊಸ ಹುಡುಗ ಹೇಗೆ ಮಾತಾಡಿಸ್ಬೇಕು ನಿಮ್ಮನ್ನ ಅನ್ನೋದೆಲ್ಲ ಗೊತ್ತಿಲ್ಲ ಅದಕ್ಕೆ ಏನೇನೋ ಮಾತಾಡಿಸಿದ ಅನ್ನಿಸುತ್ತದೆ. ಏನಾಗ್ಬೇಕಿತ್ತು ಸರ್ ಹೇಳಿ ಎಂದು ವಿನಮ್ರದಿಂದ ಮಾಲೀಕ ಮಾತನಾಡಿಸಿದ. ಮನೆಗೆ ಯಾರು ಬಂದಾಗ ಹೇಗೆ ಮಾತಾಡಿಸ್ಬೇಕು ಅಥವಾ ಯಾರ ಮುಂದೆ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನ ಯಾರೂ ಹೇಳಿ ಕೊಡಬೇಕಿಲ್ಲ. ಅದು ಬೆಳೆಯುವ ಮನುಷ್ಯನ ಸಂಸ್ಕಾರದಲ್ಲಿ ಅಡಗಿರುತ್ತೆ. ನಾವು ಮಾತನಾಡೋ ಪ್ರತಿಯೊಂದು ಶಬ್ಧವೂ ನಮ್ಮ ಸಂಸ್ಕಾರದ ಸಾಕ್ಷಿಯಾಗಿ ನಿಲ್ಲುತ್ತವೆ.ನಿನ್ನೆ ರಾತ್ರಿ ನಡೆದಿರೋ ಕೊಲೆ ವಿಚಾರ ಗೊತ್ತಿರುತ್ತೆ ಅಂದ್ಕೊಂಡಿದೀನಿ.ನಿಮ್ಮ ಸಿಸಿ ಟಿವಿ ಫುಟೆಜ್ ತೋರಿಸಿದರೆ ನಮ್ಮ ಇನ್ವೆಸ್ಟಿಗೇಷನ್ ಗೆ ಸಹಾಯ ಆಗುತ್ತೆ ಎಂದು ಇನ್ಸ್ಪೆಕ್ಟರ್ ಕೂಡ ವಿನಯದಿಂದಲೇ ಪ್ರತಿಕ್ರಿಯೆ ನೀಡಿದರು.
ಕೆಲವೊಮ್ಮೆ ನಾವೆಷ್ಟು ಮರ್ಯಾದೆ ಕೊಟ್ಟು ಮಾತನಾಡ್ಸ್ತೀವೋ ಅಷ್ಟೇ ಮರ್ಯಾದೆ ಪ್ರತಿಕ್ರಿಯೆ ಆಗಿ ನಮಗೂ ಸಿಗುತ್ತೆ. ಮಾಲೀಕ ಬಡಬಡಿಸಿ ಆ ಹುಡುಗನಿಗೆ ಹೇಳಿದ ನಿನ್ನೆ ಸಿಸಿ ಟಿವಿ ಫುಟೆಜ್ ತೆಗೆದು ತೋರಿಸು ಸಾಹೇಬ್ರಿಗೆ ಎಂದ. ಹುಡುಗ ಸ್ಟೋರ್ ರೂಮ್ ನತ್ತ ಹೋಗಿ ಹಿಂದಿನ ದಿನದ ಫುಟೇಜ್ ತೆಗೆದ ರಾತ್ರಿ ೧೦ ಘಂಟೆಯ ವೇಳೆಗೆ ಓಡಿಸಲು ಇನ್ಸ್ಪೆಕ್ಟರ್ ಹೇಳಿದರು.ಸುಮಾರು ೧೫ ನಿಮಿಷಗಳವರೆಗೆ ಫಾರ್ವಾರ್ಡ್ ಮಾಡುತ್ತಾ ನೋಡುತ್ತಿದ್ದಂತೆ ಇನ್ಸ್ಪೆಕ್ಟರ್ ಪಾಸ್ ಮಾಡಿ ಎಂದರು. ಅಮರ್ ನೀಡಿದ್ದ ಮಾಹಿತಿ ನಿಜವೇ ಆಗಿತ್ತು ಅವನು ಘಂಟೆ ೧೦.೧೫ ರ ವೇಳೆಗೆ ಆ ರೋಡ್ ನಲ್ಲಿ ಪಾಸ್ ಆಗಿದ್ದ. ಅಮರ್ ಪ್ರಾಮಾಣಿಕವಾಗಿ ನುಡಿದಿದ್ದಾನೆ ಎಂದು ಅವನ ಮೇಲೆ ನಂಬಿಕೆ ಬಂದಿತ್ತು ಇನ್ಸ್ಪೆಕ್ಟರ್ ಗೆ.ಆದರೆ ನಂತರ ೧೦.೩೦ ರಿಂದ ೧೧.೧೦ ರ ವೇಳೆಗಿನ ಫೂಟೇಜ್ ನತ್ತ ಹೋಗುತ್ತಿದ್ದಂತೇ ನಡೆದ ಅಚ್ಚರಿ ವಿಚಿತ್ರವೆನಿಸಿತ್ತು.
ಸೂರ್ಯ ಮೋಡದ ಮುಂಗುರಳನ್ನು ಸರಿಸಿ ಮೋಡದ ಒಳಗೆ ಹೋಗುತ್ತಲಿದ್ದ.ಜನರ ನಡುವೆ ಅಚ್ಚಳಿಯದ ದಿನವನ್ನು ಸೃಷ್ಟಿಸಿಟ್ಟು. ಅರವಿಂದ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದ . ಸಹಿಸಲಾಗದ ಸಂಕಷ್ಟ ಅವನದ್ದು. ಎಲ್ಲ ವಿಚಿತ್ರ ಎಂದು ಅನಿಸತೊಡಗಿತ್ತು.ಜೀವನ ಎಲ್ಲಿಗೆ ಬಂದು ಮುಟ್ಟಿದೆ ಎಂದು ತನ್ನ ಬಗ್ಗೆ ತಾನೇ ಅಸಹ್ಯಪಡತೊಡಗಿದ್ದ. ಹೆಂಡತಿಯ ವಿಚಾರ ಇನ್ನೊಂದೆಡೆ.ತಾವುಗಳು ಅದೆಷ್ಟೇ ಜಗಳ ಆಡಿದ್ದರೂ ಬಿಟ್ಟು ಇದ್ದವರಲ್ಲ.ಅರವಿಂದ್ ಚಡಪಡಿಸುತ್ತಿದ್ದ. ಅಮರ್ ಕೂಡ ಹಾಗೆಯೇ ಅವನ ಪರಿಸ್ಥಿತಿಯೂ ಅಂತೆಯೇ ಒಂಟಿಯಾದರೂ ಖಾಲಿ ಕೂತವನಲ್ಲ ದಿನವಿಡೀ ತನ್ನ ಕೆಲಸ ನಿರ್ವಹಿಸುತ್ತಾ ಜೀವನದ ಸೊಗಡನ್ನು ಹೀರುವುದು ಅವನ ವಿಶೇಷ. ಆದರೆ ಜೈಲಿನಲ್ಲಿ ಸಪ್ಪೆಮೋರೆ ಹಾಕಿ ತಾನು ಮಾಡದ ಅಥವಾ ತನಗೆ ಸಂಬಂಧ ಇಲ್ಲದ ತಪ್ಪಿಗೆ ಇಲ್ಲಿ ಯಾಕೆ ಇಟ್ಗೋಂಡಿದೀರಾ ಎಂದು ಪದೇ ಪದೇ ಎದ್ದು ಹೋಗಿ ಕಾನ್ಸ್ಟೇಬಲ್ ಕೇಳುತ್ತಿದ್ದ.ಸಾಹೇಬ್ರು ಹೇಳೋವರೆಗೂ ನೀನು ಇಲ್ಲೇ ಇರಬೇಕು.ಅಕಸ್ಮಾತ್ ಒಂದು ವೇಳೆ ನಿನ್ನ ಮನೆಗೆ ಕಳಿಸಿದ್ರೂ ಅಂತ ಅಂದ್ಕೋ,ನೀನು ಸಾಹೇಬ್ರು ಸ್ಟೇಷನ್ ಗೆ ಯಾವಾಗ ಬರಬೇಕು ಅಂತ ಕರೆಯುತ್ತಾರೋ ಅವಾಗೆಲ್ಲಾ ಬರಲೇಬೇಕು ಎಂದು ಕಾನ್ಸ್ಟೇಬಲ್ ವಿವರವಾಗಿ ಹೇಳಿದ್ದರು.